ಯಕ್ಷ ಲೋಕ

ಎಲ್ಲಿಂದ ಬಂತೀ ಸುಮಧುರ ಗಾನ
ಎಲ್ಲಿಂದ ಬಂದನೀ ಯಕ್ಷ

ಎಲ್ಲಿಂದ ಬಿದ್ದ ಸುರ ಸ್ವಪ್ನ
ಎಲ್ಲಿಂದ ತೆರೆದ ಗವಾಕ್ಷ

ಇನ್ನು ಭಾಗವತ ನಾನೆ ಇನ್ನು ಜಾಗಟೆ ನಾನೆ
ಚಂಡೆಮದ್ದಲೆ ನಾನೆ ಹಾಡು ಅರ್ಥವು ನಾನೆ

ಕೋಡಂಗಿ ಕುಣಿತ ಗೋಪಾಲ ಕುಣಿತ
ಎಲ್ಲ ಹೆಜ್ಜೆಗಳ ಇಡುವವನು ನಾನೆ

ಇದೋ ನಾಯಕ ಇದೋ ಖಳನಾಯಕ
ಸೌಮ್ಯವೇಷ ಬಣ್ಣದಾ ವೇಷ ಎಲ್ಲ ನಾನೆ

ಸ್ತ್ರೀ ವೇಷ ನಾನೆ ವಿದೂಷಕನು ನಾನೆ
ಕುಣಿಸುವವ ನಾನೆ ಕುಣಿವವನು ನಾನೆ

ಅಯೋಧ್ಯಾನಗರಿಗೆ ಯಾರೆಂತ ಕೇಳಿದಿರಿ
ಋತುಪರ್ಣರಾಜರೆನ್ನಬಹುದಯ್ಯ

ಆ ಋತುಪರ್ಣ ನಾನೆ ಅಷ್ಟಾವಕ್ರ ಬಾಹುಕನು ನಾನೆ
ಅಶ್ವಹೃದಯ ಪರಿಣತನು ನಾನೆ ಅಕ್ಷಕಲಾ ಪಂಡಿತನು ನಾನೆ

ವೃಕ್ಷದೆಲೆಗಳನ್ನು ಎಣಿಸಿದವ ನಾನೆ
ವಾಯುವೇಗದಲಿ ರಥ ಓಡಿಸಿದವ ನಾನೆ

ಯಕ್ಷ ನಾನೆ ಗಾನ ನಾನೆ
ಗೀತ ನಾನೆ ಸಂಗೀತ ನಾನೆ

ಕಾದಿರುವಳು ದಮಯಂತಿ ಹೂಮಾಲೆ ಹಿಡಿದು
ತನ್ನ ನಳನಿಗೆ ಕಾದು

ಇದು ಸ್ವಪ್ನದ ಹೊಳೆ ಇದು ಅನರ್ಘ್ಯದ ಖಣಿ
ಇದು ಪರುಷ ಮಣಿ ಇದ ಮುಟ್ಟಿದವನ ಭಾಗ್ಯ
ಈ ಯಕ್ಷವಾಣಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೯
Next post ಅಂಬನೀ ದಯಮಾಡೆ

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

cheap jordans|wholesale air max|wholesale jordans|wholesale jewelry|wholesale jerseys